ಇವನನ್ನ.. ನೇಗಿಲ ಯೋಗಿ ಅಂತಿದ್ರು... ಆದ್ರೆ ಕಾಲ ಬದಲಾಗಿದೆ... ಜನ ಬದಲಾಗಿದ್ದರೆ... ಕೃಷಿಕ ಟಿಲ್ಲರ್ ಯೋಗಿ ಯಾಗಿದ್ದಾನೆ...
ಮೊನ್ನೆ ಒಬ್ರು relEtive ಮನೆಗೆ ಹೋಗಿದ್ದೆ.... ಪಕ್ಕಾ local place ...acareಗಟ್ಟಲೆ ಗದ್ದೆ...
ಚಿಕ್ಕಂದಿನಲ್ಲಿ ಟಿಲ್ಲರ್ ನೋಡೋದಂದ್ರೆ ನಮಿಗೆಲ್ಲಾ ಹಬ್ಬ ಆಗಿತ್ತು... ಸಂಜೆ ಶಾಲೆ ಬಿಟ್ಟು ಟಿಲ್ಲರ್ ಹಿಂಬಾಲಿಸಿ ಬೈಗಳು ತಿಂದಿದ್ದಕ್ಕಂತೂ ಲೆಕ್ಕಾನೇ ಇಲ್ಲ.... ಅದನ್ನ ಬಿಡೋನು ದೊಡ್ಡ ಹೀರೋ ಆಗಿದ್ದ.... ಅಷ್ಟೊಂದರ ಮಟ್ಟಿಗೆ ನಮಿಗೆಲ್ಲರಿಗೂ ಇಷ್ಟ ಆಗಿತ್ತು ಅದು.....
ಅದೇ ನೆನಪಲ್ಲಿ ಗದ್ದೇಲಿ ಉಳುತ್ತಿದ್ದ ಅಣ್ಣನನ್ನ ನೋಡೊಕ್ಕೆ ಹೋದೆ... ತುಬಾ ಸಮಯ ಆಗಿತ್ತು ಇಂಥಾ ದೃಶ್ಯ ನೊಡದೆ.... ಚಿಕ್ಕಂದಿನಲ್ಲಿ ನಾವು ಹೇಳುತ್ತಿದ್ದಂತೆ ಅಸೂಯೇನೂ ಆಯಿತು.... ಕೆಸರಲ್ಲಿ ಆಡುತ್ತಾ ಗಾಡಿ ಓಡಿಸುತ್ತಾ ಎಷ್ಟೊಂದು ಮಜಾ ಮಾಡ್ತಿದ್ದಾನೆ ಅಂತ....
ಆದ್ರೆ ಇಂತಹಾ ದೃಶ್ಯಗಳು ಕಡಿಮೆಆಗ್ತಾ ಇವೆ... ಎಲ್ಲರೂ ಹೊರಗಡೆ ಹೋಗೋರೇ ಆಯ್ತು... ಅಬ್ಬಾ... ತೆಂಗಿನ ಕಾಯಿ ಕೊಯ್ಯೋಕ್ಕಂತೂ ಜನಾನೇ ಸಿಗಲ್ಲ... ನಾನಂತೂ ಇಂಜಿನಿಯರ್ ಆದ ಮೇಲೆ ಇದಕ್ಕೂ ರೋಬೋಟ್ ಕಂಡು ಹಿಡಿಬೇಕು ಅಂತಿದ್ದೇನೆ.... ಇರೋ ಗದ್ದೇನ ಸುಮ್ಮನೆ ಬಿಡೋರೇ ಜಾಸ್ತಿ.. ಕೇಳಿದ್ರೆ "ಅಸಲಾಪುಜ್ಜಿ ಅಣ್ಣೇರೆ " ಅಂತಾರೆ... ಬೆಲೆ ಅಂತೂ ಹಿಮಾಲಯದಂತೆ ಏರುತ್ತಾ ಇದೆ.. superb graph!!!!
/>
ಏನಂದ್ರೂ ಎಲ್ಲಾನೂ out of control... 10...20 ವರ್ಷ ಕಳೆದ ಮೇಲೆ ಏನು ತಿನ್ಬೇಕಾಗುತ್ತೋ.......!!!!
ದೇಶದ ಬೆನ್ನೆಲುಬಾದ ಕೃಷಿಕನ ಬೆನ್ನೆಲುಬು ಮಾತ್ರ ಉಳಿದಿದೆ...











