ಅಲ್ಲಿಲ್ಲಿ ಕಂಡದ್ದು.. ಮನಸ್ಸಿಗೆ ಬಂದದ್ದು... ನಾನಿಲ್ಲಿ ಗೀಚಿದ್ದು.....

Wednesday, 28 July 2010

ಟಿಲ್ಲರ್ ಯೋಗಿ....

ಕೃಷಿ ನಮ್ಮ ಪಾರಂಪರಿಕ ಕಸುಬು..... ಯವುದೇ ಕೆಲಸ ಮಾಡಲಿ... ಯಾವನೇ ಇರಲಿ.. ಅವನಿಗೆ ಹೊಟ್ಟೆಗೆ ಹಿಟ್ಟು ಬೇಕೇ ಬೇಕು... ಎಷ್ಟೇ ತಂತ್ರಜ್ನಾನ ಮುಂದುವರಿದಿದ್ದರೂ... ಇದನ್ನ ಯಾವುದೇ ಕಾರ್ಖಾನೆಯಲ್ಲೂ ತಯಾರಿಸಲು ಸಾಧ್ಯವಿಲ್ಲ... ಅನ್ನ ನೀಡೋನೇ ಕೃಷಿಕ...



















ಇವನನ್ನ.. ನೇಗಿಲ ಯೋಗಿ ಅಂತಿದ್ರು... ಆದ್ರೆ ಕಾಲ ಬದಲಾಗಿದೆ... ಜನ ಬದಲಾಗಿದ್ದರೆ... ಕೃಷಿಕ ಟಿಲ್ಲರ್ ಯೋಗಿ ಯಾಗಿದ್ದಾನೆ...





ಮೊನ್ನೆ ಒಬ್ರು relEtive ಮನೆಗೆ ಹೋಗಿದ್ದೆ.... ಪಕ್ಕಾ local place ...acareಗಟ್ಟಲೆ ಗದ್ದೆ...

ಚಿಕ್ಕಂದಿನಲ್ಲಿ ಟಿಲ್ಲರ್ ನೋಡೋದಂದ್ರೆ ನಮಿಗೆಲ್ಲಾ ಹಬ್ಬ ಆಗಿತ್ತು... ಸಂಜೆ ಶಾಲೆ ಬಿಟ್ಟು ಟಿಲ್ಲರ್ ಹಿಂಬಾಲಿಸಿ ಬೈಗಳು ತಿಂದಿದ್ದಕ್ಕಂತೂ ಲೆಕ್ಕಾನೇ ಇಲ್ಲ.... ಅದನ್ನ ಬಿಡೋನು ದೊಡ್ಡ ಹೀರೋ ಆಗಿದ್ದ.... ಅಷ್ಟೊಂದರ ಮಟ್ಟಿಗೆ ನಮಿಗೆಲ್ಲರಿಗೂ ಇಷ್ಟ ಆಗಿತ್ತು ಅದು.....

ಅದೇ ನೆನಪಲ್ಲಿ ಗದ್ದೇಲಿ ಉಳುತ್ತಿದ್ದ ಅಣ್ಣನನ್ನ ನೋಡೊಕ್ಕೆ ಹೋದೆ... ತುಬಾ ಸಮಯ ಆಗಿತ್ತು ಇಂಥಾ ದೃಶ್ಯ ನೊಡದೆ.... ಚಿಕ್ಕಂದಿನಲ್ಲಿ ನಾವು ಹೇಳುತ್ತಿದ್ದಂತೆ ಅಸೂಯೇನೂ ಆಯಿತು.... ಕೆಸರಲ್ಲಿ ಆಡುತ್ತಾ ಗಾಡಿ ಓಡಿಸುತ್ತಾ ಎಷ್ಟೊಂದು ಮಜಾ ಮಾಡ್ತಿದ್ದಾನೆ ಅಂತ....




ಆದ್ರೆ ಇಂತಹಾ ದೃಶ್ಯಗಳು ಕಡಿಮೆಆಗ್ತಾ ಇವೆ... ಎಲ್ಲರೂ ಹೊರಗಡೆ ಹೋಗೋರೇ ಆಯ್ತು... ಅಬ್ಬಾ... ತೆಂಗಿನ ಕಾಯಿ ಕೊಯ್ಯೋಕ್ಕಂತೂ ಜನಾನೇ ಸಿಗಲ್ಲ... ನಾನಂತೂ ಇಂಜಿನಿಯರ್ ಆದ ಮೇಲೆ ಇದಕ್ಕೂ ರೋಬೋಟ್ ಕಂಡು ಹಿಡಿಬೇಕು ಅಂತಿದ್ದೇನೆ.... ಇರೋ ಗದ್ದೇನ ಸುಮ್ಮನೆ ಬಿಡೋರೇ ಜಾಸ್ತಿ.. ಕೇಳಿದ್ರೆ "ಅಸಲಾಪುಜ್ಜಿ ಅಣ್ಣೇರೆ " ಅಂತಾರೆ... ಬೆಲೆ ಅಂತೂ ಹಿಮಾಲಯದಂತೆ ಏರುತ್ತಾ ಇದೆ.. superb graph!!!!


/>


ಏನಂದ್ರೂ ಎಲ್ಲಾನೂ out of control... 10...20 ವರ್ಷ ಕಳೆದ ಮೇಲೆ ಏನು ತಿನ್ಬೇಕಾಗುತ್ತೋ.......!!!!


ದೇಶದ ಬೆನ್ನೆಲುಬಾದ ಕೃಷಿಕನ ಬೆನ್ನೆಲುಬು ಮಾತ್ರ ಉಳಿದಿದೆ...

ತೋಡಲ್ಲ... ರೋಡು....

ನಾನು ಹೇಳ್ಬೇಕಾಗಿಲ್ಲ... ಹಾದು ಹೋದ ವಾಹನಗಳ ಚಕ್ರದ ಗುರುತು ನೋಡಿದಾಗಲೇ ನಿಮಿಗೆ ಗೊತ್ತಾಗುತ್ತೆ...



ಇದು ನಮ್ಮ ಹೆಮ್ಮೆಯ ಭಾರತದ ರಸ್ತೆಗಳ ಅವಸ್ತೆ... ಮಳೆಗಾಲದಲ್ಲಂತೂ ಮಳೆ ಕೊಯಿಲು ಮಾಡಲೋ ಎಂಬಂತೆ ಈ ಸರಕಾರದ ಇಂಗು ಗುಂಡಿ ವ್ಯವಸ್ಥೆ... ಅದೂ ಸಾವಿರಾರು ವಾಹನಗಳು ಸಂಚರಿಸೋ National Highwayಗಳಲ್ಲಿ...

ತಗೊಂಡಿರೋ ದುಡ್ಡಿಗೆ ಸರಿಯಾಗಿ ಕೆಲಸ ಮಾಡಲಾಗದ ದೇಶದ್ರೋಹಿಗಳಿಗೇನೂ ಕಮ್ಮಿಯಿಲ್ಲ ನಮ್ಮಲ್ಲಿ..





ತಂತ್ರಜ್ನಾನಕ್ಕೇನು ಕೊರತೆ ನಮ್ಮಲ್ಲಿ.... ಗಗನ ಚುಂಬಿ ಕಟ್ಟಡಗಳನ್ನ ಕಟ್ತಾರೆ... ಆದ್ರೆ ಮೀಟರ್ ಉದ್ದದ ಸಂಕ ಉದ್ಘಾಟನೆಯ ಮುಂಚಿನ ದಿನಾನೇ ಮುರಿದು ಬೀಳುತ್ತೆ... ಹೇಳೋರು ಕೇಳೋರು ಇದಕ್ಕೆ ಬೆಂಬಲವಾಗಿರ್ತಾರೆ.. ಪತ್ರಿಕೆಗಳು... ದೂರದರ್ಶನ ಚಾನೆಲ್ ಗಳು ಒಂದೆರಡು ದಿನ ಸುದ್ದಿ ಮಾಡಿ ಸುಮ್ನಾಗ್ತಾವೆ.. ಇತ್ತ.. ಕಳಪೆ ಕಾಮಗಾರಿ ಮಾಡಿ/ಮಾಡಿಸಿರೋನು ಆರಾಮವಾಗಿ ದೊಡ್ಡ ಬಂಗ್ಲೆ ಕಟ್ಟುತ್ತಾ ಇರ್ತಾನೆ...



ಬೇಲೀನೆ ಎದ್ದು ಹೊಲ ಮೆಯಿದರೆ??? ಹೇಳೋರಿಲ್ಲ... ಕೇಳೋರಿಲ್ಲ... ಹೆಮ್ಮೆಯಗ್ತಿದೆ ಅಲ್ವ???!!!

’ಕರ’ವೀರ!



ನನ್ನೊಬ್ಬ ಗೆಳೆಯ ಇದ್ದಾನೆ... ತುಂಬಾ ಶೂರ... ಸಾಹಸ ಸಿಂಹ... ಅವನ ಕೈಗೆ ಕರವೀರ ಸಿಕ್ಕಿದ್ದು ಹೀಗೆ........

ಅನಾಮಧೇಯ....



ಇದರ ಹೆಸರೇನು ಅಂತ ನಂಗೆ ಗೊತ್ತಿಲ್ಲ... ಸೊಪ್ಪು ಕಡೀತ್ತಾ ಸಿಕ್ತು... ಏನೊಂದು ಧೈರ್ಯ ಇದಿಕ್ಕೆ ಗೊತ್ತಾ...2..3 ಹೆಜ್ಜೇನಿನ ನೊಣಗಳಿದ್ರೂ ಆರಾಮಾಗೆ cool ಆಗಿ ಮುಂಗಾರು ಮಳೆನ enjoy ಮಾಡ್ತಾ ಇತ್ತು...

ಛೀ... ಕಳ್ಳಿ....!!!!



hmmmm ಈ ಕಳ್ಳಿ ಮೈ ತುಂಬಾ ಮುಳ್ಳಿದ್ರೂ ತುಂಬಾ ಸುಂದ್ರಿ......



ಕಯೋದೇ ಕೆಲಸ ಇವಳಿಗೆ... ಕೆಲವೆಡೆ ಹೊಲ ಕಾಯುತ್ತಾಳೆ.. ಇನ್ನು ಕೆಲವೆಡೆ... ಬೆದುರು ಗೊಂಬೆ ಜೊತೆ ಹಗಲಿರುಳೂ ವಿವಿಧ ಭಂಗಿಗಳಲ್ಲಿ pose ಕೊಡ್ತಾ ಇರ್ತಾಳೆ.... ಯಾರ ತಂಟೆಗೂ ಹೋಗಲ್ಲ... ಸುದ್ದಿಗೆ ಬಂದ್ರೆ ಮಾತ್ರ ಸುಮ್ನೆ ಬಿಡಲ್ಲ... ಸ್ನೇಹಕ್ಕೂ ಬಧ್ಧ... ಸಮರಕ್ಕೂ ಸಿಧ್ಧ .... ha ha....

Genese

ಪತ್ರೊಡೆ ನಮ್ಮೂರಲ್ಲಿ ತುಂಬಾ famous .... ಆ ಟೇಸ್ಟ್ ಅಂತೂ superb.....





ಅಂದ್ಕೊಂಡಾಗ್ಲೇ ಬಾಯಲ್ಲಿ ನೀರೂರುತ್ತೆ.... ಅಬ್ಬಾ... ಪಲ್ಯ ಹಾಗೂ ಮಜ್ಜಿಗೆ ಹುಳಿ ಟೇಸ್ಟ್ ಅಂತೂ ಹೇಳೋದೇ ಬೇಡ.. ರಜಾ ಬೇರೆ.... ಫುಲ್ ಬೋರ್ ಹೊಡೀತ್ತಾ ಇತ್ತು ... ನಮ್ಮೂರ ಮಳೆ ಅಂದ್ರೆ ಹೆಳೋದೇ ಬೇಡ... ಅಬ್ಬಾ.. ಒಂದೊಂದು ಸಾರಿ ಆಕಾಶಕ್ಕೆ ತೂತಾಗಿಬಿಟ್ಟಿತೇನೋ ಅನಿಸಿಬಿಡೋ ಥರ ಸುರಿಯುತ್ತೆ... ಪತ್ರೋಡೆ ತಿನ್ನೊಣ ಅನಿಸ್ತು.... ಅಮ್ಮನಲ್ಲಿ ಹೇಳಿದಾಗ ಎಲೆ ತಗೊಂಡ್ ಬಾ ಅಂತ ಅಪ್ಪಣೆ ಆಯಿತು... hmmm.. ಅಂತೂ ಹೊರಟೇ ಬಿಟ್ಟೆ.. ಆವಾಗಷ್ಟೆ ಮಳೆ ನಿಂತಿತ್ತು...




ಪತ್ರೊಡೆ ಎಲೆಗಳು... ಅದರ ಮೇಲೆ... ಮುತ್ತಿನಂಥ ನೀರ ಹನಿಗಳು... ಮೋಡದೆಡೆಯಿಂದ ಸೂರ್ಯ ಇಣುಕಿದ್ದ ... ಅವನ ಪ್ರಖರ ಕಿರಣಗಳು ಆ ಎಲೆಗಳ ಮೇಲೆ ಬಿದ್ದು ನೀರು ಮುತ್ತಿನಂತೆ ಹೊಳೀತಿತ್ತು...




ಎಲೆ ಹರಿದರೇನು... ನೋಡಕ್ಕೆ ಚೆನ್ನಗಿದೆಯಲ್ಲ.........




ಅಯ್ಯೊ... ಸಾಕು....ಪತ್ರೊಡೆ readyಆಗಿದೆ.... ತಿನ್ಬೇಕು...

Tuesday, 27 July 2010


ಪ್ರಕೃತಿ ಸೌಂದರ್ಯದ ಗಣಿ .. .. ಅದು ಅಸ್ವಾದಕನಿಗೆ ಮಾತ್ರ ಕಾಣಿಸುತ್ತೆ .... ಹೂವು ಅಂದ್ರೆ ಯಾರಿಗೆ ಇಷ್ಟವಿಲ್ಲ???? ಆದ್ರೆ ಗುಲಾಬಿ ಇರೋದು ಮುಳ್ಳಿನ ಎಡೆಯಲ್ಲಿ ಅನ್ನೋದು Fact.... ಇದೇ ನಮ್ಮ ಜೀವನ... ಒಮ್ಮೊಮ್ಮೆ ಹೂವಂತೆ ಸುಂದರವಾಗಿ... ಸುಕೊಮಲವಾಗಿ ಇರುತ್ತೆ... ಆದ್ರೆ ಜೊತೇಲಿ ಮುಳ್ಳು ಇದ್ದೇ ಇರುತ್ತೆ..
ಈ ಗುಲಾಬೀನ ನೋಡಿ... ಪ್ರಕೃತಿ ಎಷ್ಟೊಂದು ಅದ್ಭುತ!!! ಈ ಹೂವು compleat ಆಗಿ ಅರಲಿಲ್ಲ... but... still try ಮಾಡ್ತಾ ಇದೆ.. ಮೊಳಕೆ ಒಡೆಯೋ ಬೀಜ... ಅದ್ರ ಕವಚ ಎಷ್ಟೊಂದು ಬಲವಾಗಿದ್ರೂ ಸ್ಪೋಟ ಆಗಲ್ವಾ???? ಪ್ರಕೃತಿ ಅಂದ್ರೆ ಹೀಗೇನೆ..... ಅದ್ಭುತ...ರಮಣೀಯ...ಹಾಗೇನೇ ನಿಘೂಡ.........
--

ಬೆಳಕು


ಬೆಳಕು ನಮ್ಮ ಜೀವನದ ಅವಿಭಾಜ್ಯ ಅಂಗ... ನಮ್ಮಲ್ಲಿ ಬೆಳಕು ಅಂದ್ರೆ ಜ್ಞಾನ ಅಂತ.. ಅಮೇರಿಕಾ ದಲ್ಲಿ ಕರೆಂಟ್ ಹೋದ್ರೆ ಕರೆಂಟ್ ಆಫೀಸಿಗೆ ಫೋನ್ ಮಾಡ್ತಾರೆ... ಚೀನಾದಲ್ಲಿ fuse ನೋಡ್ತಾರೆ... ನಮ್ಮಲ್ಲೊ??? ಪಕ್ಕದ್ ಮನೆ ನೋಡ್ತೀವಿ.... true... but fact....!!!
ತುಂಬಾ power waste ಮಾಡ್ತೀವಲ್ಲಾ... ಅದೇ ಒಂದು ಕಾರಣ...power cutಗೆ.. ವಿದ್ಯುತ್ ಇಲಾಖೆಯವರೇನೂ ಕಮ್ಮಿ ಇಲ್ಲ... ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡ್ತಾರೆ. ... ಹೀಗೆ ಒಂದು power cut ಇದ್ದಾಗ ತೆಗೆದಿರೋದು ಈ photo..