ಅಲ್ಲಿಲ್ಲಿ ಕಂಡದ್ದು.. ಮನಸ್ಸಿಗೆ ಬಂದದ್ದು... ನಾನಿಲ್ಲಿ ಗೀಚಿದ್ದು.....

Wednesday, 28 July 2010

ತೋಡಲ್ಲ... ರೋಡು....

ನಾನು ಹೇಳ್ಬೇಕಾಗಿಲ್ಲ... ಹಾದು ಹೋದ ವಾಹನಗಳ ಚಕ್ರದ ಗುರುತು ನೋಡಿದಾಗಲೇ ನಿಮಿಗೆ ಗೊತ್ತಾಗುತ್ತೆ...



ಇದು ನಮ್ಮ ಹೆಮ್ಮೆಯ ಭಾರತದ ರಸ್ತೆಗಳ ಅವಸ್ತೆ... ಮಳೆಗಾಲದಲ್ಲಂತೂ ಮಳೆ ಕೊಯಿಲು ಮಾಡಲೋ ಎಂಬಂತೆ ಈ ಸರಕಾರದ ಇಂಗು ಗುಂಡಿ ವ್ಯವಸ್ಥೆ... ಅದೂ ಸಾವಿರಾರು ವಾಹನಗಳು ಸಂಚರಿಸೋ National Highwayಗಳಲ್ಲಿ...

ತಗೊಂಡಿರೋ ದುಡ್ಡಿಗೆ ಸರಿಯಾಗಿ ಕೆಲಸ ಮಾಡಲಾಗದ ದೇಶದ್ರೋಹಿಗಳಿಗೇನೂ ಕಮ್ಮಿಯಿಲ್ಲ ನಮ್ಮಲ್ಲಿ..





ತಂತ್ರಜ್ನಾನಕ್ಕೇನು ಕೊರತೆ ನಮ್ಮಲ್ಲಿ.... ಗಗನ ಚುಂಬಿ ಕಟ್ಟಡಗಳನ್ನ ಕಟ್ತಾರೆ... ಆದ್ರೆ ಮೀಟರ್ ಉದ್ದದ ಸಂಕ ಉದ್ಘಾಟನೆಯ ಮುಂಚಿನ ದಿನಾನೇ ಮುರಿದು ಬೀಳುತ್ತೆ... ಹೇಳೋರು ಕೇಳೋರು ಇದಕ್ಕೆ ಬೆಂಬಲವಾಗಿರ್ತಾರೆ.. ಪತ್ರಿಕೆಗಳು... ದೂರದರ್ಶನ ಚಾನೆಲ್ ಗಳು ಒಂದೆರಡು ದಿನ ಸುದ್ದಿ ಮಾಡಿ ಸುಮ್ನಾಗ್ತಾವೆ.. ಇತ್ತ.. ಕಳಪೆ ಕಾಮಗಾರಿ ಮಾಡಿ/ಮಾಡಿಸಿರೋನು ಆರಾಮವಾಗಿ ದೊಡ್ಡ ಬಂಗ್ಲೆ ಕಟ್ಟುತ್ತಾ ಇರ್ತಾನೆ...



ಬೇಲೀನೆ ಎದ್ದು ಹೊಲ ಮೆಯಿದರೆ??? ಹೇಳೋರಿಲ್ಲ... ಕೇಳೋರಿಲ್ಲ... ಹೆಮ್ಮೆಯಗ್ತಿದೆ ಅಲ್ವ???!!!

No comments: